Sunday 28 January 2018

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 15/11/2017

1) ಗೋವಾದಲ್ಲಿ ಇದೇ 20ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಎನ್.ಎಫ್.ಡಿ.ಸಿ.ಯ ಫಿಲಂ ಬಜಾರ್ ವೇದಿಕೆಯ ವ್ಯೂವಿಂಗ್ ರೂಮ್ ಕೆಟಗರಿಯಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರ ಯಾವುದು?
a) ದಿ ವಿಲನ್
b) ಕರ್ವ
c) ಕಾಫಿತೋಟ
d) ಈ ಪಟ್ಟಣಕ್ಕೆ ಏನಾಗಿದೆ✔✔
📗📗📗📗📗📗📗📗📗📗📗📗📗📗

2)  ಭೌಗೋಳಿಕ ವೈಶಿಷ್ಠ್ಯತೆಗಾಗಿ ರಾಜ್ಯಗಳ ಮಧ್ಯೆ ವಿವಾದ ಸೃಷ್ಟಿಸಿದ್ದ ಸಿಹಿತಿಂಡಿ 'ರಸಗುಲ್ಲ'ವನ್ನು  ಜಿಐ (ಜಿಯೋಗ್ರಾಫಿಕಲ್ ಇಂಡಿಕೇಷನ್ ಆಫ್ ಗೂಡ್ಸ್ ರೆಜಿಸ್ಟ್ರೇಷನ್) ಯಾವ ರಾಜ್ಯ ಮೂಲದ್ದೆಂದು ಘೋಷಿಸಿದೆ?
a) ಒಡಿಶಾ 
b) ಪಶ್ಚಿಮ ಬಂಗಾಳ ✔✔
c) ಮಣಿಪುರ 
d) ಗುಜರಾತ್ 
📗📗📗📗📗📗📗📗📗📗📗📗📗📗

3) ಯೋಗ ಕಲಿಕೆಗೆ ಮತ್ತು ಬೋಧನೆಗೆ ಮಾನ್ಯತೆ ನೀಡಿದ ಮುಸ್ಲಿಂ ರಾಷ್ಟ್ರ ಯಾವುದು?
a) ಇರಾಕ್ 
b) ಸೌದಿ ಅರೇಬಿಯಾ✔✔
c) ಇಂಡೊನೇಷ್ಯಾ 
d) ಇರಾನ್
📗📗📗📗📗📗📗📗📗📗📗📗📗

4) ಗಣಪತಿ ದೇವರ ಚಿತ್ರವನ್ನು ನೋಟಿನಲ್ಲಿ ಮುದ್ರಿಸಿರುವ ಏಕೈಕ ಮುಸ್ಲಿಂ ರಾಷ್ಟ್ರ ಯಾವುದು? 
a) ಇರಾಕ್ 
b) ಕತಾರ್ 
c) ಇಂಡೊನೇಷ್ಯಾ ✔✔
d) ಇರಾನ್
📗📗📗📗📗📗📗📗📗📗📗📗📗📗📗

5) ರಾಷ್ಟ್ರೀಯ ಪಿಂಚಣಿ ಯೋಜನೆಗೆ(ಎನ್.ಪಿ.ಎಸ್) ಸೇರಲು ಬಯಸುವವರ ವಯಸ್ಸಿನ ಗರಿಷ್ಟ ಮಿತಿಯನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ?
a) 58.
b) 60.
c) 62
d) 65.✔✔
📗📗📗📗📗📗📗📗📗📗📗📗📗📗

6) 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಜಾಗತಿಕ ಸಮರಕ್ಕೆ ಅರ್ಹತೆ ಗಳಿಸಲು ವಿಫಲವಾದ  ಮಾಜಿ ಚಾಂಪಿಯನ್ ತಂಡ ಯಾವುದು? 
a) ಜರ್ಮನಿ
b) ಬಾರ್ಸಿಲೋನಾ 
c) ಇಟಲಿ✔✔
d) ಬೆಲ್ಜಿಯಂ 
📗📗📗📗📗📗📗📗📗📗📗📗📗📗

7) ಪ್ರಸ್ತುತ ಅಮೆರಿಕದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಚೀನಾದವರು ಪ್ರಥಮ ಸ್ಥಾನದಲ್ಲಿದ್ದರೆ 2ನೇ ಸ್ಥಾನದಲ್ಲಿರುವವರು ಯಾರು?
a) ಜಪಾನೀಯರು
b) ಇಟಲಿಯನ್ನರು
c) ಭಾರತೀಯರು✔✔
d) ಮಲೇಶಿಯನ್ನರು
📗📗📗📗📗📗📗📗📗📗📗📗📗📗📗

8) ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ದ ತೀರ್ಪುಗಾರರ ತಂಡದ ಮುಖ್ಯಸ್ಥ (ಜ್ಯೂರಿ) ಸ್ಥಾನಕ್ಕೆ ಯಾರು ರಾಜೀನಾಮೆ ನೀಡಿದ್ದಾರೆ?
a) ಶಶಿರಾಜ್ ರಾವ್ ಕಾವೂರು
b) ಅನುಪಮ್​ ಖೇರ್​
c)  ಅಶ್ವಿನ್ ಪಿರೇರಾ
d) ಸುಜಯ್ ಘೋಷ್✔✔
📗📗📗📗📗📗📗📗📗📗📗📗📗

9) ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತವು ಯಾವ ಜಿಲ್ಲೆಯ  5 ಗ್ರಾಮಗಳ ವ್ಯಾಪ್ತಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಪಾರ್ಕ್‌ ನಿರ್ಮಿಸುತ್ತಿದೆ?
a) ರಾಮನಗರ 
b) ತುಮಕೂರು✔✔
c) ಹಾಸನ 
d) ಮಂಡ್ಯ 
📗📗📗📗📗📗📗📗📗📗📗📗📗📗

10) 1857ರ ಸಿಪಾಯಿ ದಂಗೆಯನ್ನು ಮೊಟ್ಟಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಪರಿಗಣಿಸಲಾಗಿದೆ. ಆದರೆ ಇದಕ್ಕೂ ಮುನ್ನ ಬ್ರಿಟಿಷರ ವಿರುದ್ಧ ನಡೆದ ಬಂಡಾಯ ಯಾವುದು?
a) ಬೈಜಾಕಿ ಬಂಡಾಯ
b) ವಂಗ ಭಂಗ ಬಂಡಾಯ
c) ವಾಘ ಬಂಡಾಯ
d) ಪೈಕಾ ಬಂಡಾಯ✔✔
📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.