Tuesday, 17 November 2015

ಉಸಿರಾಟದ ತಂತ್ರಗಳು

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಜ್ಞಾನಸೆಲೆ
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಏದುಸಿರು, ದಮ್ಮು, ಆಯಾಸ... ಓಡುವುದಿರಲಿ ಸ್ವಲ್ಪ ದೂರ ವೇಗವಾಗಿ ನಡೆದರೂ ಏದುಸಿರು ಬಿಡುವ ಜನರಿದ್ದಾರೆ. ಇನ್ನು ಕೆಲವರಿಗೆ ಕುಳಿತರೆ, ಮಲಗಿದರೆ ಉಸಿರಾಟಕ್ಕೆ ಅಡೆತಡೆ. ಹವಾನಿಯಂತ್ರಿತ(ಎಸಿ) ಕೊಠಡಿಯಲ್ಲಿದ್ದರೆ ಕೆಲವರಿಗೆ ತೊಂದರೆ, ಕೆಲವರು ಅದಿಲ್ಲದಿದ್ದರೆ ಇರಲಾಗದೆನ್ನುವಷ್ಟರ ಮಟ್ಟಿಗೆ ಹೊಂದಿಕೊಂಡಿದ್ದಾರೆ. ಇವೆಲ್ಲಾ ತೊಂದರೆಗಳಿಂದ ದೂರವಿರಲು ನಾವಿರುವ ಮನೆ, ಕೆಲಸ ನಿರ್ವಹಿಸುವ ಕಚೇರಿ, ವಿರಾಮ ವೇಳೆಯಲ್ಲಿದ್ದಾಗ, ದೂರದ ಪ್ರಯಾಣ ಮಾಡುವಾಗ ಉಸಿರಾಟದ ಕೆಲ ಕ್ರಮಗಳ ಅಭ್ಯಾಸ ನಡೆಸಬೇಕಿದೆ.
ಎತ್ತ ನೋಡಿದರೂ ಶುದ್ಧ ಗಾಳಿ ಎಂಬುದು ಮರೀಚಿಕೆಯಂತಾದ ಪರಿಸರ ಸೃಷ್ಟಿಯಾಗಿದೆ. ಇವೆಲ್ಲದರ ನಡುವೆ ಉಸಿರುಕಟ್ಟಿದ ಪ್ರಯಾಣ ನಮ್ಮದಾಗಿದೆ. ಇದರ ಮಧ್ಯೆ ಚೈತನ್ಯ ಯುಕ್ತವಾದ ಶುದ್ಧ ಪ್ರಾಣ ವಾಯುವನ್ನು ಹರಸಿ ಹೊರಟರೆ ಸಿಕ್ಕೀತಾದರೂ; ಅದರ ಸಂಪೂರ್ಣ ಪ್ರಯೋಜನ ಪಡೆಯುವುದು ಹೇಗೆ? ಉಸಿರಾಡುವುದನ್ನೂ ಕಲಿಯಬೇಕೆ? ತಾಯಿ ಗರ್ಭದಿಂದ ಹೊರ ಬಿದ್ದ ಮಗುವಿಗೆ ಉಸಿರಾಡುವುದನ್ನು ಯಾರುತಾನೆ ಕಲಿಸಿದರು? ಹೀಗಿರುವಾಗ ಉಸಿರಾಡುವುದನ್ನೂ ಕಲಿಯುವ ಅಗತ್ಯವಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.
ಆಸ್ತಮಾ, ದಮ್ಮಿನಿಂದಾಗಿ ಮೂಗಿನ ಒಳಭಾಗದಲ್ಲಿ ದುರ್ಮಾಂಸ, ಮೂಳೆ ಅಡ್ಡಲಾಗಿ ಬೆಳೆದಿದ್ದರೆ, ಅತಿಯಾದ ಶೀತ ಮತ್ತು ಉಷ್ಣ ಉಂಟಾಗಿದ್ದರೆ, ಕಿರಿದಾದ ಹೊರಳೆಗಳಿದ್ದರೆ ಉಸಿರಾಟಕ್ಕೆ ಅಡ್ಡಿಯಾಗುತ್ತದೆ. ದುರ್ಮಾಂಸ ಬೆಳವಣಿಗೆಯಿಂದಾಗುವ ಗೊರಕೆ ಸದ್ದು ಮನೆಯವರ, ಅಕ್ಕಪಕ್ಕದ ಮನೆಯವರ ನಿದ್ದೆಯನ್ನೂ ಕೆಡಿಸಿದ್ದಿದೆ!! ಈ ಎಲ್ಲಾ ತೊಂದರೆ ನಿವಾರಿಸಿಕೊಂಡು ಸರಾಗವಾದ ಉಸಿರಾಟ ನಡೆಸಲು ಮೂಗಿನ ಸ್ವಚ್ಛತೆ ಅವಶ್ಯ.
ಯೋಗದ ಷಟ್ಕರ್ಮವಿಧಿಯಲ್ಲಿ ಹೇಳಿರುವ ಜಲನೇತಿ, ಜಲ ಕಪಾಲಭಾತಿ, ಸೂತ್ರನೇತಿ ಅಭ್ಯಾಸ ಮಾಡುವ ಮೂಲಕ ಮೂಗಿನ ಒಳಭಾಗವನ್ನು ಶುಚಿಗೊಳಿಸಿಕೊಳ್ಳಬೇಕು. ಬಳಿಕ ಕ್ರಮಬದ್ಧ ಉಸಿರಾಟ ಅಭ್ಯಾಸ ನಡೆಸಬೇಕು. ಯೋಗದಲ್ಲಿ ಉಸಿರಾಟ ಕ್ರಮವನ್ನು ವಿವರಿಸುವ ಪ್ರಾಣಾಯಾಮದಲ್ಲಿ ಕೆಲವು ಸರಳ ಉಸಿರಾಟ ತಂತ್ರಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಹಿಂದೆಯೇ ಪ್ರಾಣಾಯಾಮ ಅಭ್ಯಾಸದ ಪರಿಸರ, ಸಮಯ, ನೆಲಹಾಸು, ಕುಳಿತುಕೊಳ್ಳುವ ವಿಧಾನ, ಬಳಕೆಯಾಗುವ ಮುದ್ರೆ ಇವುಗಳ ಬಗ್ಗೆ ಹೇಳಲಾಗಿದೆ.
ಪೂರಕ: ಉಸಿರನ್ನು ತೆಗೆದುಕೊಳ್ಳುವುದು, 
ಅಂತರ ಕುಂಭಕ: ಉಸಿರನ್ನು ಒಳಗೆ ಹಿಡಿದು ನಿಲ್ಲಿಸುವುದು, 
ರೇಚಕ: ಉಸಿರನ್ನು ಹೊರ ಹಾಕು ವುದು, 
ಬಾಹ್ಯ ಕುಂಭಕ: ಉಸಿರನ್ನು ಸಂಪೂರ್ಣ ವಾಗಿ ಹೊರ ಹಾಕಿ ತಡೆದು ನಿಲ್ಲಿಸುವುದು.
ತಂತ್ರಗಳು
ಉಸಿರಾಟ ಅತಿ ವೇಗವಾದ, ತೋರಿಕೆಯ ಅಥವಾ ಮೇಲುಕೆಳಗಾಗುವ ಬದಲಿಗೆ ತಾಳಬದ್ಧ, ಮೃದು ಹಾಗೂ ಸ್ತಿಮಿತವುಳ್ಳದ್ದಾಗಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ವೃತ್ತಿ ಪ್ರಾಣಾಯಾಮಗಳ ಬಗ್ಗೆ ತಿಳಿಸಲಾಗಿದೆ. ವೃತ್ತಿ ಎಂದರೆ ಚಲನೆ, ನಡವಳಿಕೆ ಅಥವಾ ರೀತಿ ಎಂದರ್ಥ. 1) ಸಮ ವೃತ್ತಿ, 2) ವಿಷಮವೃತ್ತಿ ಎರಡು ವಿಧ. ಪೂರಕ, ಕುಂಭಕ, ರೇಚಕ, ಬಾಹ್ಯ ಕುಂಭಕ ಈ ನಾಲ್ಕೂ ಸಮಾನ ಕಾಲಾವಧಿಯಲ್ಲಿರುವುದು ಸಮವೃತ್ತಿ, ಈ ನಾಲ್ಕರಲ್ಲೂ ಕಾಲಾವಧಿ ಅಸಮಾನವಾದದ್ದು ವಿಷಮವೃತ್ತಿ. ಅಸಮಾನ ಕಾಲಾವಧಿಯ ಕಾರಣಕ್ಕೆ ಉಸಿರಿನ ತಾಳ ತಪ್ಪುವ ಹಾಗೂ ನರ, ಶ್ವಾಸಕೋಶಗಳು ಗಟ್ಟಿಮುಟ್ಟಾಗಿಲ್ಲದವರಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅನುಭವಿ ಗುರುವಿನ ಪ್ರತ್ಯಕ್ಷ ಮಾರ್ಗದರ್ಶನದಲ್ಲಿ ಅಭ್ಯಾಸ ಒಳಿತು.
ಸಮವೃತ್ತಿ: ಅಭ್ಯಾಸಕ್ಕೆ ಕುಳಿತ ಬಳಿಕ ಮೊದಲು ಸಮ ಪ್ರಮಾಣದಲ್ಲಿ ಪೂರಕ, ರೇಚಕಗಳನ್ನು 10 ನಿಮಿಷ ಅಭ್ಯಾಸ ಮಾಡಿ (ಪೂರಕ 2 ಸೆಕೆಂಡು. ರೇಚಕ 2ಸೆ. ಈ ಎರಡರ 4ಸೆಕೆಂಡಿನ ಒಂದು ಆವೃತ್ತಿಯಂತೆ 15 ಆವೃತ್ತಿ ಪೂರ್ಣಗೊಳಿಸಿದರೆ ಒಂದು ನಿಮಿಷವಾಗುತ್ತದೆ. ಇದರಂತೆ ಮನದಲ್ಲಿಯೇ 150 ಆವೃತ್ತಿಗಳನ್ನು ಸೂಕ್ಷ್ಮವಾಗಿ ಎಣಿಸುತ್ತಾ 10 ನಿಮಿಷವನ್ನು ಕಣ್ಮುಚ್ಚಿಯೂ ಕರಾರುವಕ್ಕಾಗಿ ಅರಿಯಬಹುದು.)
ನಂತರ ಅಂತರ ಕುಂಭಕ ಸಹಿತ ಅಭ್ಯಾಸ ಮುಂದುವರೆಸಿ (ಪೂರಕ; ಕುಂಭಕ; ರೇಚಕ). ಪೂರಕ, ರೇಚಕ ಸಮಾನವಾಗಿದ್ದು, ಕುಂಭಕವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾಹೋಗಿ. ಆರಂಭದಲ್ಲಿ 1: 1/4: 1, ಮುಂದುವರೆದು 1: 1/2: 1, ನಂತರ 1: 3/4: 1ಕ್ಕೆ ಏರಿಸಿ ಇದನ್ನು ಸಾಧಿಸಿದ ಬಳಿಕ 1: 1: 1ಕ್ಕೆ ಹೆಚ್ಚಿಸಿ. ಸಾಧಿಸುವ ವರೆಗೆ ಬಾಹ್ಯ ಕುಂಭಕ ಬೇಡ.
ಬಾಹ್ಯ ಕುಂಭಕ ಸಹಿತ ಅಭ್ಯಾಸ ಮುಂದುವರಿಕೆ(ಪೂರಕ, ಕುಂಭಕ, ರೇಚಕ, ಬಾಹ್ಯ ಕುಂಭಕ) ಮೊದಲ ಮೂರು ಸಮಾನ ವಾಗಿದ್ದು ಭಾಹ್ಯ ಕುಂಭಕವನ್ನು ಹಂತ ಹಂತವಾಗಿ ಹೆಚ್ಚಿಸಿ. 1: 1: 1: 1/4, ಮುಂದುವರೆದು 1: 1: 1: 1/2, ನಂತರ 1: 1: 1: 3/4, ಇದನ್ನು ಸಾಧಿಸಿದ ಬಳಿಕ 1: 1: 1: 1ಕ್ಕೆ ಹೆಚ್ಚಿಸಿ. ಮೇಲಿನ ಎಲ್ಲಾ ಪ್ರತಿ ಹಂತಗಳನ್ನು ಆರು ಆವೃತ್ತಿ ಅಭ್ಯಾಸ ಮಾಡುತ್ತಾ ಬರಬೇಕು. (ಮೇಲಿನ ಎಲ್ಲವನ್ನು ಅನುಸರಿಸಬೇಕಾದ ಕ್ರಮದ ಉದಾ: 1: 1: 1: 1/4 ಇಲ್ಲಿ ಪೂರಕ 1:=ನಾಲ್ಕು ಸೆಕೆಂಡು, ಕುಂಭಕ 1:=ನಾಲ್ಕು ಸೆ., ರೇಚಕ 1:= ನಾಲ್ಕು ಸೆ., ಬಾಹ್ಯ ಕುಂಭಕ 1/4:= ಒಂದು ಸೆಕೆಂಡು. ಮುಂದುವರಿಕೆ- 1/2:= ಎರಡು ಸೆ., 3/4:= ಮೂರು ಸೆ., 1:= ನಾಲ್ಕು ಸೆ.)
ವಿಷಮವೃತ್ತಿ: ಪೂರಕ, ಕುಂಭಕ, ರೇಚಕ, ಬಾಹ್ಯ ಕುಂಭಕ ಈ ನಾಲ್ಕರಲ್ಲೂ ಕಾಲಾವಧಿ ಅಸಮವಾದದ್ದಾಗಿರುತ್ತದೆ. ಈ ನಾಲ್ಕೂ ಕೂಡಿ ಒಂದು ಆವೃತ್ತಿ. ಕನಿಷ್ಠ ಆರು ಆವೃತ್ತಿ ಅಭ್ಯಾಸ ನಡೆಸಿ. ತೀವ್ರ ಒತ್ತಡ ಉಂಟಾದರೆ ನಿಲ್ಲಿಸಿ ಸರಳವಾದ ಉಸಿರಾಟ ನಡೆಸಿ.
ಪೂರಕ, ರೇಚಕ ಅಸಮವಾಗಿದ್ದು, ಕುಂಭಕವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ಹೋಗಿ. ಆರಂಭದಲ್ಲಿ 1: 2: 1, ಮುಂದುವರೆದು 1: 3:1, ನಂತರ 1: 4:1ಕ್ಕೆ ಏರಿಸಿ ಇದನ್ನು ಸಾಧಿಸಿದ ಬಳಿಕ 1:4: 1 1/4, 1:4:1 1/2, ಮುಂದುವರೆದು 1: 4: 1 3/4, ನಂತರ 1: 4: 2ಕ್ಕೆ ಹೆಚ್ಚಿಸಿ. ಇದರ ಸಾಧನೆಯ ನಂತರ ಬಾಹ್ಯ ಕುಂಭಕ ಅಳವಡಿಸಿಕೊಳ್ಳಿ. ಆರಂಭದಲ್ಲಿ 1: 4: 2: 1/4, ಮುಂದುವರೆದು 1: 4: 2: 1/2, ನಂತರ 1: 4: 2: 3/4, ಕೊನೆಯಲ್ಲಿ 1: 4: 2:1. ಹೆಚ್ಚಿನ ಸಾಧನೆ ಬಳಿಕ ಕ್ರಮವನ್ನು ಅದಲು ಬದಲು ಮಾಡಿ ಅಭ್ಯಾಸ ನಡೆಸಬಹುದು.
(ಮೇಲಿನ ಎಲ್ಲವನ್ನು ಅನುಸರಿಸಬೇಕಾದ ಕ್ರಮದ ಉದಾ: 1: 4: 2: 1/4 ಇಲ್ಲಿ ಪೂರಕ 1:= ನಾಲ್ಕು ಸೆಕೆಂಡು, ಕುಂಭಕ 4:=16ಸೆ., ರೇಚಕ 2:= ಎಂಟು ಸೆ., ಬಾಹ್ಯ ಕುಂಭಕ 1/4:= ಒಂದು ಸೆಕೆಂಡು. ಮುಂದುವರಿಕೆ- 1/2:=ಎರಡು ಸೆ., 3/4:= ಮೂರು ಸೆ., 1:= ನಾಲ್ಕು ಸೆ.)
*
ಹೀಗೆ ಮಾಡಿ
*ಎಲ್ಲಿಯೇ ಕುಳಿತುಕೊಳ್ಳಿ ಬೆನ್ನು ನೇರವಾಗಿರಿಸಿ ಉಸಿರಾಡಿ.
*ಮೈ ಮುದುಡಿ ಮಲಗಬೇಡಿ ಉಸಿರಾಟಕ್ಕೆ ತೊಂದರೆಯಾಗುತ್ತದೆ.
*ಆಂಜನೇಯನ ಮೂತಿಯಂತೆ ಮುಖ ಬಿಗಿಹಿಡಿದು ಉಸಿರಾಟಬೇಡಿ.
*ಎಲ್ಲಿಯೇ ಇರಿ; ಏನೇ ಕೆಲಸ ಮಾಡುತ್ತಿರಿ ಉಸಿರಾಟದ ಕಡೆ ನಿಮ್ಮ ಒಂದು ಗಮನವಿರಿಸಿ.
*ಉಸಿರಾಟ ಪ್ರಕ್ರಿಯೆ ಬಗ್ಗೆ ಮನದಲ್ಲೇ ಲೆಕ್ಕ ಹಾಕಿ ನಿಮಿಷ, ಆವೃತ್ತಿ, ಗಂಟೆಗಳ ಲೆಕ್ಕವನ್ನು ಗಡಿಯಾರದ ಸಹಾಯವಿಲ್ಲದೇ ಹೇಳಬಲ್ಲ ಸಾಮರ್ಥ್ಯ ನಿಮ್ಮದಾಗುತ್ತದೆ.
*ದೀರ್ಘ ಉಸಿರಾಟ ರೂಢಿಸಿಕೊಳ್ಳಿ.
*ದೀರ್ಘ ಉಸಿರಾಟ ಮೆದುಳಿಗೆ ಹೆಚ್ಚಿನ ಆಮ್ಲಜನಕ ಪೂರೈಸುತ್ತದೆ, ವಿಶ್ರಾಂತಿ ನೀಡುತ್ತದೆ.

ಅಂಧರಿಗೆಂದೇ ಬ್ರೈಲ್‌ ದಿಕ್ಸೂಚಿ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಮೈಸೂರು ರೈಲ್ವೆ ವಿಭಾಗವು ಇದೀಗ ಮೈಸೂರು ನಿಲ್ದಾಣದಲ್ಲಿ ಅಂಧಸ್ನೇಹಿ ‘ಬ್ರೈಲ್ ಮಾರ್ಗಸೂಚಿ’ಯನ್ನು ಅಳವಡಿಸಿ ಹೊಸ ಮೈಲುಗಲ್ಲು ನಿರ್ಮಿಸಿದೆ. ದೃಷ್ಟಿಹೀನರ ಉನ್ನತಿಗಾಗಿಯೇ ಶ್ರಮಿಸುತ್ತಿರುವ ‘ಅನುಪ್ರಯಾಸ್‌ ಟ್ರಸ್ಟ್‌’ ಸಂಸ್ಥೆ ಈ ಸೌಕರ್ಯದ ನಿರ್ಮಾತೃ. ವಿ.ಪಿ. ಸಹನಾ, ಪಂಚಮ್‌ ಕಜ್ಲಾ, ಗೌತಮ್‌ ಕಣ್ಣನ್‌, ಶಕ್ತಿ ಸಿಯಾರಾ, ಕುಮಾರ್‌ ಮೋಹಿತ್‌, ಎ.ಆರ್‌. ಶ್ವೇತಾ ತಂಡದ ಕೈಚಳಕದಲ್ಲಿ ಇದು ಅರಳಿದೆ.

ಅಂಧರು ಸ್ವತಂತ್ರವಾಗಿ ವ್ಯವಹರಿಸಲು, ಸೇವೆ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ‘ಟಿಕೆಟ್‌ ಕೌಂಟರ್‌’, ‘ಪ್ಲಾಟ್‌ಫಾರಂ’, ರೈಲುಗಳ ವೇಳಾಪಟ್ಟಿ, ಪ್ರತೀಕ್ಷಣಾಲಯ, ಶೌಚಾಲಯ, ಉಪಾಹಾರ ಗೃಹ ಸೇರಿದಂತೆ ನಿಲ್ದಾಣದ ಸಮಗ್ರ ಚಿತ್ರಣ ಇದರಲ್ಲಿದೆ.

ಒಂದನೇ ಪ್ಲಾಟ್‌ಫಾರಂನ ಪ್ರವೇಶ ದ್ವಾರದ ಬಳಿಯ ಗೋಡೆಗೆ ಈ ‘ಸ್ಪರ್ಶ ಸಂವೇದಿ ನಕ್ಷೆ’ಯನ್ನು ಅಳವಡಿಸಲಾಗಿದೆ. ಬ್ರೈಲ್‌ ಲಿಪಿ ಬಲ್ಲವರು ನಿಲ್ದಾಣದಲ್ಲಿನ ಸೌಲಭ್ಯಗಳನ್ನು ಗ್ರಹಿಸಲು ಇದು ದಾರಿದೀಪ. ನಕ್ಷೆಯ ಮುಂದೆ ಪ್ರಯಾಣಿಕ ನಿಂತಿರುವ ಜಾಗದಿಂದ ನಿಲ್ದಾಣದ ಯಾವ್ಯಾವ ಭಾಗದಲ್ಲಿ ಏನೇನು ಸೇವೆ, ಸೌಲಭ್ಯಗಳಿವೆ ಎಂಬ ವಿಸ್ತೃತ ವಿವರಣೆಯನ್ನು ಒಳಗೊಂಡಿದೆ.

ಮೈಸೂರು ನಿಲ್ದಾಣದ ರೈಲುಗಳ ವೇಳಾಪಟ್ಟಿಯನ್ನು ಅಳವಡಿಸಿ, ಅದರಲ್ಲಿ ಗಾಡಿ ಸಂಖ್ಯೆ, ಹೆಸರು, ವೇಳೆ ಇತ್ಯಾದಿ ನಮೂದಿಸಲಾಗಿದೆ. ‘ಟಿಕೆಟ್‌ ಕೌಂಟರ್‌’ ಯಾವ ದಿಕ್ಕಿಗೆ ಮತ್ತು ಎಷ್ಟು ದೂರ ಇದೆ. ‘ಪ್ಲಾಟ್‌ ಫಾರಂ’ಗಳಿಗೆ ತಲುಪುವುದು ಹೇಗೆ, ಒಂದು ಪ್ಲಾಟ್‌ಫಾರಂನಿಂದ ಮತ್ತೊಂದಕ್ಕೆ ತೆರಳಲು ನಿರ್ಮಿಸಿರುವ ಮೇಲುಸೇತುವೆ ಯಾವ ಭಾಗದಲ್ಲಿದೆ ಎಂಬ ಮಾಹಿತಿ ಇದೆ. ಮೆಟ್ಟಿಲು ಮಾರ್ಗದ ಬದಿಗಳಲ್ಲಿನ ಕಂಬಿಗಳಲ್ಲಿ ಲೋಹದ ಪ್ಲೇಟ್‌ನಲ್ಲಿ ‘ಪ್ಲಾಟ್‌ಫಾರಂ’ (‘ಪಿ1’, ‘ಪಿ2‘, ‘ಪಿ3’...) ಸಂಖ್ಯೆಗಳನ್ನು ಬ್ರೈಲ್‌ನಲ್ಲಿ ಹಾಕಲಾಗಿದೆ. ಪ್ರವೇಶದ್ವಾರಗಳು ಎಲ್ಲೆಲ್ಲಿವೆ ಎಂಬುದನ್ನು ‘ಇ1’, ‘ಇ2’, ‘ಇ3’, ‘ಇ4’ ಸಂಕೇತದಲ್ಲಿ ವಿವರಿಸಲಾಗಿದೆ.

ಉಪಾಹಾರ ಮಂದಿರ, ಕುಡಿಯವ ನೀರಿನ ಘಟಕ, ಪ್ರತೀಕ್ಷಣಾಲಯ, ಶೌಚಾಲಯ ಎಲ್ಲಿದೆ, ಅಲ್ಲಿಗೆ ತಲುಪಲು ಎಷ್ಟು ದೂರ ಕ್ರಮಿಸಬೇಕು ಎಂಬ ಮಾಹಿತಿ ಇದೆ. ‘ಎಚ್‌’ (ಹೋಟೆಲ್), ‘ಡಬ್ಲ್ಯು’ (ವಾಟರ್‌), ‘ಡಬ್ಲ್ಯುಎಲ್‌’ (ವೇಯ್ಟಿಂಗ್‌ ರೂಂ), ‘ಟಿಆರ್‌’ (ಟಾಯ್ಲೆಟ್‌ ರೂಂ) ಸಂಕೇತ ಬಳಸಿ ವಿವರಿಸಲಾಗಿದೆ. ಉಪಾಹಾರ ಗೃಹದಲ್ಲಿ ಲಭ್ಯ ಇರುವ ಪಾನೀಯ, ತಿಂಡಿ ಇತ್ಯಾದಿಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುವಂತೆ ‘ಬ್ರೈಲ್‌ ಮೆನು ಕಾರ್ಡ್‌’ ಇಡಲಾಗಿದೆ.

‘ನಿಲ್ದಾಣದಲ್ಲಿ ಇತರರ ಸಹಾಯವನ್ನು ಪಡೆಯದೆ ಅಂಧರು ಸ್ವತಃ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳುವಂತೆ ಮಾರ್ಗಸೂಚಿಯನ್ನು ಸಿದ್ಧಗೊಳಿಸಲಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಮೈಸೂರು ನಿಲ್ದಾಣದಲ್ಲಿ ಈ ಸೌಲಭ್ಯವನ್ನು ಅಳವಡಿಸಲಾಗಿದೆ. ಇಂಥ ಮಾರ್ಗಸೂಚಿ ಸೌಕರ್ಯ ಹೊಂದಿದ ದೇಶದ ಪ್ರಥಮ ನಿಲ್ದಾಣ ಇದಾಗಿದೆ. ಮೈಸೂರು ನಿಲ್ದಾಣದಿಂದ ತಿಂಗಳಿಗೆ ಸರಾಸರಿ 4 ಸಾವಿರ ಅಂಧರು ವಿವಿಧೆಡೆಗಳಿಗೆ ಸಂಚರಿಸುತ್ತಾರೆ.
ಈಗ ಬಳಕೆದಾರರಿಂದ ಸಲಹೆ, ಸೂಚನೆಗಳನ್ನು ಸಂಗ್ರಹಿಸಲಾಗುತ್ತಿದೆ. ಅವುಗಳನ್ನು ಆಧರಿಸಿ ಕೆಲ ಮಾರ್ಪಾಡುಗಳನ್ನು ಮಾಡಲಾಗುವುದು’ ಎಂದು ನಕ್ಷೆ ಅಭಿವೃದ್ಧಿ ತಂಡದ ವಿ.ಪಿ. ಸಹನಾ ಹೇಳುತ್ತಾರೆ.

‘ಈಗಾಗಲೇ ಕೆಲವರು ಕುಬ್ಜರಿಗೂ ಅನುಕೂಲವಾಗುವಂತೆ ನಕ್ಷೆಯನ್ನು ಇನ್ನೂ ಸ್ವಲ್ಪ ಕೆಳಗಡೆ ಹಾಕಿದರೆ ಅನುಕೂಲವಾಗುತ್ತದೆ, ಲೋಹದ ಫಲಕ ಅಳವಡಿಸುವುದು ಸೂಕ್ತ, ಸ್ಪರ್ಶ ಸಂವೇದಿ ನೆಲಹಾಸು ವ್ಯವಸ್ಥೆ ಮಾಡಬೇಕು, ಶ್ರವ್ಯ (ಆಡಿಯೊ) ವ್ಯವಸ್ಥೆ ಇದ್ದರೆ ಒಳಿತು ಎಂಬಿತ್ಯಾದಿ ಹಲವು ಸಲಹೆಗಳು ವ್ಯಕ್ತವಾಗಿವೆ. ಇವೆಲ್ಲವುಗಳನ್ನು ಪರಿಶೀಲಿಸಿ ಎರಡನೇ ಹಂತದಲ್ಲಿ ಅಳವಡಿಸಲು ಗಮನಹರಿಸುತ್ತೇವೆ’ ಎಂದು ಅವರು ತಿಳಿಸುತ್ತಾರೆ.

ಹೈಟೆಕ್‌ ಶೌಚಾಲಯ
ಪರಿಸರ ಸ್ನೇಹಿ ‘ಹೈಟೆಕ್‌’ ಸೌಲಭ್ಯಗಳತ್ತ ಚಿತ್ತ ಹರಿಸಿರುವ ಮೈಸೂರು ರೈಲ್ವೆ ವಿಭಾಗವು ಮೈಸೂರು ನಿಲ್ದಾಣದಲ್ಲಿ ‘ಎಲೆಕ್ಟ್ರಾನಿಕ್‌ ಶೌಚಾಲಯ’ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 6ನೇ ಪ್ಲಾಟ್‌ಫಾರಂನಲ್ಲಿ (ಸಿಎಫ್‌ಟಿಆರ್‌ಐ ಕಡೆಗಿನ ಪ್ರವೇಶ ದ್ವಾರ) ಎರಡು ಹೈಟೆಕ್‌ ಶೌಚಾಲಯಗಳನ್ನು ಅಳಡಿಸಲಾಗಿದೆ. ಕಾವಲುರಹಿತ, ಸ್ವಯಂಚಾಲಿತ ಈ ಶೌಚಾಲಯ 24X7 ಕಾರ್ಯನಿರ್ವಹಿಸುತ್ತದೆ. ಮಕ್ಕಳಿಂದ ವೃದ್ಧರವರೆಗೂ ಬಳಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ವೆಬ್‌ ಪರಿವೀಕ್ಷಣೆಯಡಿ ಕೆಲಸ ಮಾಡುವ ಇದಕ್ಕೆ ಸ್ವಯಂಚಾಲಿತ ಸ್ವಚ್ಛತಾ ತಂತ್ರಜ್ಞಾನ ಅಳವಡಿಸಲಾಗಿದೆ.

‘ಸ್ಟೇನ್‌ಲೆಸ್‌ ಸ್ಟೀಲ್‌ ಬೇಸ್‌’ನ ಈ ಕಿಯೋಸ್ಕ್‌ ಸುಮಾರು 25 ಚದರ ಅಡಿ ವಿಸ್ತೀರ್ಣದಲ್ಲಿ ನೆಲೆಗೊಂಡಿದೆ. ವಿದ್ಯುತ್‌ಗೆ ಸೌರಶಕ್ತಿ ಮತ್ತು ನೀರು ಪೂರೈಕೆಗೆ ‘ಟ್ಯಾಂಕ್‌’ ಇದೆ. ವಿದ್ಯುತ್‌ ಮತ್ತು ನೀರು ಪೋಲಾಗದಂತೆ ತಡೆಯಲು ಸಂವೇದಿ ತಂತ್ರಜ್ಞಾನವೂ ಇದೆ. ಮಹಿಳೆಯರ ಕಿಯೋಸ್ಕ್‌ನಲ್ಲಿ ‘ನ್ಯಾಪ್‌ಕಿನ್‌’ ದಹನ ಯಂತ್ರವೂ ಇದೆ. ಶೌಚಾಲಯದ ಒಳಗೆ ‘ಶ್ರವ್ಯ’ (ಆಡಿಯೊ) ಸೌಕರ್ಯವೂ ಇದೆ. ಶೌಚಾಲಯ ಬಳಕೆಗೆ ಮುಕ್ತವಾಗಿದ್ದರೆ ಹಸಿರು ದೀಪ, ಬಳಕೆಯಲ್ಲಿದ್ದರೆ ಕೆಂಪು ದೀಪ, ನೀರಿನ ಪ್ರಮಾಣ ಕಡಿಮೆ ಇದ್ದರೆ ಹಳದಿ ದೀಪ ಹೊತ್ತಿರುತ್ತದೆ.

ಪ್ರವೇಶದ ಬಳಿ ನಿಗದಿತ ಸ್ಥಳದಲ್ಲಿ 2 ರೂಪಾಯಿ ನಾಣ್ಯ ಹಾಕಿ ಶೌಚಾಲಯದ ಬಾಗಿಲು ತೆರೆಯಬಹುದು. ತಕ್ಷಣ ಸೌರದೀಪ ಮತ್ತು ‘ಫ್ಯಾನ್‌’ ಕಾರ್ಯನಿರ್ವಹಿಸಲು ಆರಂಭಿಸುತ್ತವೆ. ಒಳಗೆ ಹೋದಾಕ್ಷಣ ಬಾಗಿಲು ಹಾಕಿ ಚಿಲಕ ಹಾಕುವಂತೆ ನಿರ್ದೇಶನದ ಧ್ವನಿ ಕೇಳಿಸುತ್ತದೆ. ಒಳಗೆ ಒಂದು ಚಿಕ್ಕ ‘ವಾಷ್‌ ಬೇಸಿನ್‌’ ಮತ್ತು ಬಟ್ಟೆ ‘ಹ್ಯಾಂಗರ್‌’ ಇದೆ.

ಶೌಚಾಲಯದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಗ್ರಾಹಕರು ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಧ್ವನಿ ವಿವರಣೆ ನೀಡಲಾಗುತ್ತದೆ. ಅಲ್ಲದೇ ಶೌಚಾಲಯ ಗುಂಡಿಯೊಳಕ್ಕೆ ಕಸ (ಗುಟ್ಕಾ ಪ್ಯಾಕೇಟ್‌, ಸಿಗರೇಟು, ಬೀಡಿ) ಎಸೆಯದಂತೆ ಸ್ಪಷ್ಟ ಸೂಚನೆಯನ್ನು ಹಾಕಲಾಗಿದೆ. ಕಸವನ್ನು ಹಾಕಲು ಈ ಕಿಯೋಸ್ಕ್‌ ಪಕ್ಕದಲ್ಲಿಯೇ ಬುಟ್ಟಿಯನ್ನೂ ಇಡಲಾಗಿದೆ. ಶೌಚಾಲಯ ಕೊಳಕಾಗಿದ್ದರೆ ‘ಫ್ಲೋರ್‌ ವಾಶ್‌’ ಗುಂಡಿ ಒತ್ತಿ ಸ್ವಚ್ಛಗೊಳಿಸಬಹುದು.

ನದಿ ರಭಸವಾದಷ್ಟು ಹೆಚ್ಚಿನ ಇಂಗಾಲ ಡೈ ಆಕ್ಸೈಡ್ ಬಿಡುಗಡೆ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ

ಜ್ಞಾನಸೆಲೆ
ಲಂಡನ್: ನದಿಗಳು ರಭಸವಾಗಿ ಹರಿದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ! ಇಂಗ್ಲೆಂಡ್ನ ಗ್ಲಾಸ್ಗೋ ವಿಶ್ವವಿದ್ಯಾಲಯದ ಸಂಶೋಧಕರ ತಂಡದ ಸಂಶೋಧನೆಯಿಂದ ಈ ಅಂಶ ಬಹಿರಂಗಗೊಂಡಿದೆ.
ಸಂಶೋಧಕರ ತಂಡದ ಪ್ರಕಾರ ರಭಸವಾಗಿ ಹರಿಯುವ ನದಿಗಳು ಹಾಗೂ ಕಠಿಣ ಪರಿಶ್ರಮದ ಕೆಲಸ ಮಾಡುವ ಮಾನವನ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಕಠಿಣ ಪರಿಶ್ರಮದ ಕೆಲಸ ಮಾಡುವಾಗ ಮನುಷ್ಯರು ಹೇಗೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನ್ನು ಹೊರಹಾಕುತ್ತಾರೋ ಅದೇ ರೀತಿ ನದಿಗಳು ಕೂಡ ರಭಸವಾಗಿ ಹರಿದಂತೆ ಹೆಚ್ಚಿನ ಪ್ರಮಾಣದ ಇಂಗಾಲಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ.
ಸ್ಕಾಟ್ಲೆಂಡ್ನಲ್ಲಿ ಎರಡು ನದಿಗಳು ಮತ್ತು ಪೆರುವಿಯನ್ ಅಮೆಜಾನ್ನಲ್ಲಿ ನಾಲ್ಕು ನದಿಗಳ ಬಳಿ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಈ ವಿಷಯ ಖಚಿತಪಟ್ಟಿದ್ದಾಗಿ ಸಂಶೋಧಕರ ತಂಡ ತಿಳಿಸಿದೆ.
ಜಾಗತಿಕ ವಾತಾವರಣದ ಮೇಲೆ ಮಾನವನ ಚಟುವಟಿಕೆಗಳಿಂದಾಗಿ ಆಗುವ ಪರಿಣಾಮವನ್ನು ಅರಿಯಲು ಅತ್ಯಂತ ಜಟಿಲವಾಗಿರುವ ಕಾರ್ಬನ್ ಸೈಕಲ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನದಿ, ಸಮುದ್ರ ಮತ್ತು ಮಹಾಸಾಗರಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಇಂಗಾಲ ಅನಿಲದಿಂದಾಗುವ ಪರಿಣಾಮದ ಬಗ್ಗೆ ವಿಜ್ಞಾನಿಗಳ ಸಂಕುಲ ಇದುವರೆಗೆ ಭಾರಿ ಅವಜ್ಞೆ ತೋರಿರುವುದಾಗಿ ಸಂಶೋಧಕರ ತಂಡ ಅಭಿಪ್ರಾಯಪಟ್ಟಿದೆ.
ಸಂಶೋಧನೆ ನಡೆಸಿದ ರೀತಿಯ ಬಗ್ಗೆ ಮಾಹಿತಿ ನೀಡಿರುವ ಸಂಶೋಧಕರ ತಂಡ, ಪ್ರತಿಯೊಂದು ತಾಣದಲ್ಲಿ ನದಿಗಳು ಪರಿಸರಕ್ಕೆ ಬಿಡುಗಡೆ ಮಾಡುವ ಇಂಗಾಲಡೈಆಕ್ಸೈಡ್ ಅನಿಲದ ಪ್ರಮಾಣವನ್ನು ನೇರಳಾತಿ ಅನಿಲ ವಿಶ್ಲೇಷಕಗಳನ್ನು (ಇನ್ಪ್ರಾರೆಡ್ ಗ್ಯಾಸ್ ಅನಲೈಸರ್ಸ್) ಬಳಸಿ ಪರೀಕ್ಷಿಸಲಾಯಿತು. ನೀರಿನ ಹರಿವಿನ ವೇಗವನ್ನು ಅಳೆಯಲು ಪ್ರತ್ಯೇಕವಾದ ಫ್ಲೋಮೀಟರ್ ಅನ್ನು ಬಳಕೆ ಮಾಡಲಾಯಿತೆಂದು ತಿಳಿಸಿದ್ದಾರೆ.
ಇಂಗಾಲ ಡೈ ಆಕ್ಸೈಡ್ ಬಿಡುಗಡೆ ಹೇಗೆ ಸಾಧ್ಯ?
ನದಿ ದಂಡೆಯಲ್ಲಿನ ಮಣ್ಣು, ಮರಳು, ಕೊಳೆಯುತ್ತಿರುವ ಜೈವಿಕ ತ್ಯಾಜ್ಯಗಳ ಮೂಲಕ ನದಿ ನೀರು ಇಂಗಾಲವನ್ನು ಹೀರಿಕೊಳ್ಳುತ್ತದೆ. ಹರಿಯುವ ರಭಸ ಹೆಚ್ಚಾಗುತ್ತಿದ್ದಂತೆ ನದಿ ನೀರು ಇಂಗಾಲ ಡೈ ಆಕ್ಸೈಡ್ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಸರಕ್ಕೆ ಬಿಡುಗಡೆ ಮಾಡಲಾರಂಭಿಸುತ್ತದೆ. ಒಂದು ಅಂದಾಜಿನ ಪ್ರಕಾರ ಈ ರೀತಿಯಾಗಿ ಪ್ರತಿ ವರ್ಷ 2 ಲಕ್ಷ ಕೋಟಿ ಕಿಲೋಗ್ರಾಂನಷ್ಟು ಇಂಗಾಲ ಡೈ ಆಕ್ಸೈಡ್ ಬಿಡುಗಡೆಯಾಗುತ್ತಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಅಂಗವಿಕಲರಿಗೆ ಮೀಸಲು ನಿಗದಿ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಜ್ಞಾನಸೆಲೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ-ಕೆಪಿಎಸ್ಸಿ ವತಿಯಿಂದ ನಡೆಯುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ದೃಷ್ಟಿಮಾಂದ್ಯ, ಶ್ರವಣದೋಷ ಹಾಗೂ ಅಂಗವೈಕಲ್ಯ ಹೊಂದಿದವರಿಗೆ ಮೀಸಲು ಹುದ್ದೆಗಳನ್ನು ಗುರುತಿಸಿ ರಾಜ್ಯ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿದೆ.
 
ಸರ್ಕಾರ ಈ ಅಧಿಸೂಚನೆ ಪ್ರತಿಯನ್ನು ಸೋಮವಾರ ಹೈಕೋರ್ಟ್ಗೆ ಸಲ್ಲಿಸಿತು. ಇದನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿತು. ಜತೆಗೆ, ಈ ಅಧಿಸೂಚನೆಯನ್ನು ಮುಂಬರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಳ್ಳುವಂತೆ ಸೂಚಿಸಿತು.
 
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಾದ ಕೆಎಎಸ್ ಮತ್ತಿತರರ ಎ ಹಾಗೂ ಬಿ ವರ್ಗದ ಹುದ್ದೆಗಳಲ್ಲಿ ದೃಷ್ಟಿಮಾಂದ್ಯರು, ಮಂದ ದೃಷ್ಟಿಯುಳ್ಳವರಿಗೆ ಮೀಸಲು ಕಲ್ಪಿಸುವಂತೆ ಕೋರಿ ರಾಷ್ಟ್ರೀಯ ಅಂಧರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂಗವಿಕಲರಿಗೆ ಮೀಸಲು ಕಲ್ಪಿಸಿ ಅ.10ರಂದು ನೂತನ ಅಧಿಸೂಚನೆ ಹೊರಡಿಸಿತ್ತು.
 
ಪ್ರಸಕ್ತ ಸಾಲಿಗೆ ಅನ್ವಯವಿಲ್ಲ: ಈ ಅಧಿಸೂಚನೆಯನ್ನು ಪ್ರಸ್ತುತ ನಡೆಯುತ್ತಿರುವ ಕೆಎಎಸ್ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಕೂಡ ಅಳವಡಿಸಬೇಕು ಎಂದು ಅರ್ಜಿದಾರರ ಪರವಾಗಿ ವಕೀಲೆ ಜೈನಾ ಕೊಠಾರಿ ಮನವಿ ಮಾಡಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಹಾಗೂ ಕೆಪಿಎಸ್ಸಿ ಪರ ವಕೀಲರು, ಈಗಾಗಲೇ ಕೆಎಎಸ್ನ ಅಂತಿಮ ಪರೀಕ್ಷೆ ಪೂರ್ಣಗೊಂಡಿದ್ದು, ವ್ಯಕ್ತಿತ್ವ ಪರೀಕ್ಷೆಯ ತಯಾರಿಯಲ್ಲಿದೆ. ಈ ಹಂತದಲ್ಲಿ ಹೊಸದಾಗಿ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.
 
ಇದನ್ನು ಪರಿಗಣಿಸಿದ ಪೀಠ, ಪ್ರಸ್ತುತ ನೇಮಕ ಪ್ರಕ್ರಿಯೆಗೆ ಹೊಸ ಮೀಸಲು ಅಧಿಸೂಚನೆ ಅನ್ವಯವಾಗುವಂತೆ ಆದೇಶ ನೀಡಲು ನಿರಾಕರಿಸಿತು

Saturday, 14 November 2015

ಲಂಡನ್ ನಲ್ಲಿ ಜಗಜ್ಯೋತಿ ಬಸವಣ್ಣ ಪ್ರತಿಮೆ ಅನಾವರಣ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE
ಥೇಮ್ಸ್‌ ದಂಡೆ ಮೇಲೆ ಕಲ್ಯಾಣ ಜ್ಯೋತಿ
ಥೇಮ್ಸ್ ನದಿ ತೀರದಲ್ಲಿ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ.
ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು.
ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಮೋದಿ ಅವರು, ಜಗಜ್ಯೋತಿ ಬಸವೇಶ್ವರರ ಕರ್ಮಯೋಗದ ಕುರಿತು ಮಾತನಾಡಿದರು. ಲಂಡನ್ ನಲ್ಲಿ ಪ್ರತಿಮೆಗೆ ಜಾಗ ಸಿಕ್ಕಿದ್ದು, ಬಸವೇಶ್ವರರ ಪ್ರತಿಮೆಯನ್ನು ನಾನು ಅನಾವರಣಗೊಳಿಸಿದ್ದು ನನ್ನ ಸೌಭಾಗ್ಯ. ಇದು ನನ್ನ ಜೀವನದ ಅಪೂರ್ವ ಕ್ಷಣ ಎಂದು ಬರ್ಣಿಸಿದರು.
ಅಬ್ರಾಹಂ ಲಿಂಕನ್ ಅವರಿಗೂ ಮುಂಚಿತವಾಗಿಯೇ ಬಸವಣ್ಣನವರು ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದರು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾಜ ಸುಧಾರಕರಾಗಿದ್ದರು. ಅಸ್ಪೃಶ್ಯತೆ ನಿವಾರಣೆ, ಜಾತಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ಲ್ಯಾಂಬೆತ್‌ನ ಮಾಜಿ ಮೇಯರ್‌ ಡಾ. ನೀರಜ್‌ ಪಾಟೀಲ್‌ ಸೇರಿದಂತೆ ಹಲವು ಮಂದಿ ಭಾರತೀಯರು ಹಾಗೂ ಕನ್ನಡಿಗರು ಕ್ಷಣಕ್ಕೆ ಸಾಕ್ಷಿಯಾದರು.

ಗ್ರಾಮ ವಿಕಾಸದಡಿ ಪ್ರತಿಹಳ್ಳಿಗೆ -ರೂ.75 ಲಕ್ಷ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE

ಬೆಂಗಳೂರು: ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದ ಸುವರ್ಣ ಗ್ರಾಮೋದಯ ಯೋಜನೆಗೆ ಕೊಕ್ ನೀಡಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ಸಮಗ್ರ ಗ್ರಾಮಾಭಿವೃದ್ಧಿಯ ಜತೆಗೆ ಗ್ರಾಮದ ಯುವಜನತೆಗೆ ಕೌಶಲ ತರಬೇತಿಯ ಮೂಲಕ ಅವರ ಜೀವನಮಟ್ಟ ಸುಧಾರಿಸುವ ಹೊಸ ‘ಗ್ರಾಮ ವಿಕಾಸ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿಸಲಿರುವ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ 3 ವರ್ಷಗಳ ಕಾಲಮಿತಿ ಹಾಕಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರತಿ ಗ್ರಾಮಕ್ಕೆ 75 ಲಕ್ಷ ರೂ.ನಂತೆ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 3.75 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗುತ್ತದೆ.
ಅನುದಾನವನ್ನು ಬಳಕೆ ಮಾಡಿಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗಿದೆ. ಯಾವ ಯೋಜನೆಗಳಿಗೆ ಈ ಹಣ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಖರ್ಚು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಅನುದಾನವನ್ನು ಜಿಪಂಗಳ ಮೂಲಕ ಗ್ರಾಪಂಗಳ ಖಾತೆಗೆ ನೇರವಾಗಿ ಸಂದಾಯ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಗತಿಯನ್ನು ಪ್ರತಿ 2 ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ನಿರá-ದ್ಯೋಗಿಗಳಿಗೆ ತರಬೇತಿ: ಗ್ರಾಮೀಣ ಭಾಗದ ಜನ ಕೃಷಿಯನ್ನಷ್ಟೇ ನೆಚ್ಚಿಕೊಳ್ಳಬಾರದೆಂಬ ಕಾರಣಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗá-ವುದು. ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು, ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಂಘಗಳ ಒಕ್ಕೂಟ ಸ್ಥಾಪಿಸá-ವ ಅವಕಾಶ ಕಲ್ಪಿಸಲಾಗಿದೆ.
ಸುವರ್ಣ ಗ್ರಾಮೋದಯ ಸಮಾಪ್ತಿ ಏಕೆ?
ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರ ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಳಿಸಿತ್ತು. ಒಂದು ಗ್ರಾಮದ ಸಮಗ್ರ ಅಭಿವೃದ್ಧಿಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು. ಆದರೆ ನಂತರದ ಹಂತಗಳಲ್ಲಿ 1 ಕೋಟಿ ರೂಪಾಯಿಗಳನ್ನು 2 ಅಥವಾ 3 ಗ್ರಾಮಗಳಿಗೆ ಹಂಚಿಕೆ ಮಾಡಲಾಯಿತು. ಅಭಿವೃದ್ಧಿಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಲಿಲ್ಲ. ಮಹಾಲೇಖಪಾಲರು ಈ ರೀತಿಯ ಅನುದಾನ ಹಂಚಿಕೆಯ ಕುರಿತು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ವಿಕಾಸ ಯೋಜನೆ ಜಾರಿಗೊಳಿಸಲಾಗಿದೆ.
ಗ್ರಾಮ ವಿಕಾಸದ ಮೂಲಕ ಚೆಲುವ ಕನ್ನಡ ನಾಡು ಕಟ್ಟುವುದೇ ನಮ್ಮ ಉದ್ದೇಶ. 3 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಸುಸ್ಥಿರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಗ್ರಾಮದ ಜನ ಕೃಷಿ ಮಾತ್ರವಲ್ಲ ಕೃಷಿಯೇತರ ಮೂಲದಿಂದಲೂ ಆದಾಯ ಗಳಿಸುವಂತಾಗಬೇಕು. ಅದು ನಮ್ಮ ಸರ್ಕಾರದ ಗುರಿ.
| ಎಚ್.ಕೆ.ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ
ಅನುದಾನ ಹಂಚಿಕೆ ವಿವರ
***ರಸ್ತೆ, ಚರಂಡಿ ನಿರ್ವಣಕ್ಕೆ ಶೇ.50
***ಗ್ರಂಥಾಲಯ, ಸಭಾಭವನ, ರಂಗಮಂದಿರ ನಿರ್ವಣಕ್ಕೆ ಶೇ.12
***ಗರಡಿಮನೆ, ಜಿಮ್ ಫ್ಲಡ್ಲೈಟ್ ಆಟದ ಮೈದಾನ ನಿರ್ವಣ, ದೇಸಿ ಕ್ರೀಡಾ ಚಟುವಟಿಕೆಗಳಿಗಾಗಿ ಶೇ.12
***ಸೌರ ಬೆಳಕು ದೀಪಗಳ ಅಳವಡಿಕೆ ಶೇ.3
***ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣ ಶೇ.10
***ಗ್ರಾಪಂ ನಡಾವಳಿ ನೇರ ಪ್ರಸಾರದ ಮೂಲ ಸೌಕರ್ಯಕ್ಕೆ ಶೇ.2
***ದೇವಸ್ಥಾನ, ಚರ್ಚ್, ಮಸೀದಿ ನಿರ್ಮಾಣ ಅಥವಾ ಪುನರುಜ್ಜೀವನಕ್ಕಾಗಿ ಶೇ.6
***ಫ್ಲೆಕ್ಸಿ ಫಂಡ್ ಶೇ.5
ಯಾವುದಕ್ಕೆ ಖರ್ಚು ಮಾಡಬಾರದು?
*ವೈಯಕ್ತಿಕ ಸಾಲ
*ಕಚೇರಿ ವೆಚ್ಚ ಮತ್ತು ಸಿಬ್ಬಂದಿ ವೇತನ
*ಕಚೇರಿಗೆ ಸಲಕರಣೆ ಖರೀದಿ
*ವಾಹನ ಖರೀದಿ, ದುರಸ್ತಿ, ಇಂಧನ ವೆಚ್ಚ, ಬಾಡಿಗೆ ವಾಹನ
*ಪ್ರವಾಸ ಮತ್ತು ಅಧ್ಯಯನ ಪ್ರವಾಸ
*ಪಂಚಾಯಿತಿ ಸಭೆ, ಸಮಾರಂಭಗಳು
ಗ್ರಾಪಂ ಸಂಖ್ಯೆ 6,189 ಏರಿಕೆ
ನಂಜಯ್ಯನಮಠ ನೇತೃತ್ವದ ಗ್ರಾಮ ಪಂಚಾಯಿತಿ ಪುನರ್ವಿಂಗಡಣಾ ರಚನಾ ಸಮಿತಿ 439 ಗ್ರಾಪಂಗಳ ರಚನೆಗೆ ಶಿಫಾರಸು ಮಾಡಿತ್ತು. ಬಳಿಕ ಸಿಎಂ ಶಿಫಾರಸಿನ ಮೇರೆಗೆ 15 ಗ್ರಾಪಂಗಳು ಸೇರಿಕೊಂಡಿದ್ದರಿಂದ ಗ್ರಾಪಂಗಳ ಸಂಖ್ಯೆ 454ಕ್ಕೆ ಏರಿಕೆ ಆಗಿತ್ತು. ಚುನಾವಣೆ ಬಳಿಕ ಇನ್ನೂ 6 ಗ್ರಾಪಂಗಳ ರಚನೆಗೆ ಆದೇಶ ಹೊರಬಿದ್ದಿದೆ. ಆದ್ದರಿಂದ ಈಗ ಹೊಸ ಪಂಚಾಯಿತಿಗಳ ಸಂಖ್ಯೆ 460ಕ್ಕೆ ಏರಿದೆ. ರಾಜ್ಯದಲ್ಲಿ ಈಗಾಗಲೇ 5,629 ಗ್ರಾಪಂಗಳು ಅಸ್ತಿತ್ವದಲ್ಲಿದ್ದು, ಒಟ್ಟು ಪಂಚಾಯಿತಿಗಳ ಸಂಖ್ಯೆ 6,189ಕ್ಕೆ ಏರಿಕೆ ಆದಂತಾಗಿದೆ.
ಹೊಸ ಕಟ್ಟಡಕ್ಕೆ ನೆರವು
ಹೊಸ ಗ್ರಾಪಂ ಕೇಂದ್ರದಲ್ಲಿ ಕಟ್ಟಡ ನಿರ್ವಣಕ್ಕೆ 20 ಲಕ್ಷ ರೂ. ನೆರವು ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಆದರೆ 20 ಲಕ್ಷ ರೂ. ನೆರವು ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ದೊರೆತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ 16 ಲಕ್ಷ ರೂ. ಅನುದಾನವನ್ನು ಕಟ್ಟಡಕ್ಕೆ ಬಳಸಿಕೊಳ್ಳುವಂತೆ ಗ್ರಾಮೀಣಾ ಭಿವೃದ್ಧಿ ಇಲಾಖೆ 460 ಗ್ರಾಪಂಗಳಿಗೂ ಸೂಚನೆ ನೀಡಿದೆ.
6 ಹೊಸ ಪಂಚಾಯಿತಿ
ಚುನಾವಣೆ ಹೊತ್ತಿಗೆ 454 ಹೊಸ ಗ್ರಾಪಂಗಳಿಗೆ ಅಧಿಸೂಚನೆ ಹೊರಡಿಸಿದ್ದರಿಂದ ಈ ಪಂಚಾಯಿತಿಗಳು ಒಟ್ಟಿಗೆ ಅಸ್ತಿತ್ವಕ್ಕೆ ಬಂದಿವೆ. ಚುನಾವಣೆ ಬಳಿಕವೂ 6 ಗ್ರಾಪಂಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

Thursday, 12 November 2015

Right to Freedom – Article 19

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE

Article 19 enumerates certain positive rights conferred by the Constitution in order to provide the ideal of liberty promised in the Preamble. However, absolute individual rights cannot be guaranteed by any modern State. Articles 19 to 22 deal with different aspects of this basic right. Taken together, these four Articles form a charter of personal liberties, which provides the backbone of the chapter on Fundamental Rights.


“Six freedoms” under the Constitution are guaranteed to all citizens conferring upon the State power to impose, by law, reasonable restrictions in the larger interests of the community. These are :


(1) Freedom of speech and expression;


(2) Freedom to assemble peaceably and without arms;


(3) Freedom to form associations or unions;


(4) Freedom to move freely throughout the territory of India;


(5) Freedom to reside and settle in any part of the territory of India; and


(6) Freedom to practise any profession, or to carry on any occupation, trade or business.


It is impossible to exaggerate the importance of these freedoms in any democratic society. Indeed, the very test of a democratic society is the extent to which these freedoms are enjoyed by the citizens in general. These freedoms, as a whole, constitute the liberty of the individual. And liberty is one of the most essential ingredients of human happiness and progress. The most important among the inalienable rights of man, according to the Declaration of American Independence, are “life, liberty and the pursuit of happiness”. The Preamble of almost every Constitution declares the same in one form or the other as its objectives. The Preamble of the Constitution of the United States, for instance, declares that one of its objectives is “to secure the blessings of liberty to ourselves and to our posterity”. The Preamble of the Indian Constitution, too, proclaims that one of its objectives is to secure Liberty—“Liberty of thought, expression, belief, faith and worship.”

Division of Indian Constitution



ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE


Part I

Comprises Articles 1- 4 and deals with the territory of India, admission or establishment of new States, formation of new States and alteration of areas, boundaries or names of existing States.



Part II

Comprising Articles 5-11 deals with citizenship at the commencement of the Constitution, ‘rights of citizenship of certain persons who migrated to India from Pakistan’, rights of citizenship of certain migrants to Pakistan, rights of citizenship of persons of Indian origin residing outside India, persons voluntarily acquiring citizenship of a foreign state, continuance of rights of citizenship and the right of Parliament to regulate the rights of citizenship by law.



Part III

Covers Articles 12-35 and deals with the Fundamental Rights of Indian citizens. Articles 14-18 deal with the right to equality. Article 19 deals with six freedoms of Indian citizens namely, (a) freedom of speech and expression; (b) freedom of assembly; (c) freedom of association; (d) freedom of movement throughout the territory of India; (e) freedom of residence and settlement in any part of India; and (f) freedom of occupation. Articles 20-22 spell out protection to all persons in respect of conviction, prosecution and rights available to them in this regard. Articles 23-24 deal with the right against exploitation and prohibit traffic in human beings, forced labour, employment of children below 14 years in factories, mines and other hazardous jobs. Articles 25-28 deal with the right to religion. Articles 29-30 deal with cultural and educational rights and afford protection to the interests of minorities. Article 31 dealing with the right to property was deleted by the Forty-fourth Amendment. Articles 32-35 provide the right to constitutional remedies to citizens.



Part IV

Covering Articles 36-51 deals with the Directive Principles of State Policy which aim at establishing social and economic democracy in the country.



Part IV-A contains only Article 51 A, which was added by the Forty-second Amendment in 1976. It outlines the duties of the citizens of India.



Part V

Covers Articles 52-151 and deals with the government at the Union level, Articles 52-73 deal with the President and the Vice-President of India. Articles 74- 75 deal with the Council of Ministers and the Prime Minister of India. Article 76 relates to the Attorney General of India. Article 77 stipulates that all executive orders of the Government of India shall be taken in the name of the President. Article 78 specifies the duties of the Indian Prime Minister with respect to the furnishing of information to President etc. Articles 79-106 relate to the Indian Parliament and deal with the organisation of the Lok Sabha and the Rajya Sabha; the delimitation of territorial constituencies; qualification for membership of Parliament; power of the President to summon, prorogue and address either House of Parliament; disqualification of members; powers, privileges and immunities of Parliament and its members, salaries and allowances of members and so on. Articles 107-122 deal with the legislative procedure in Parliament. Article 123 deals with the legislative powers of the President. Articles 124-147 deal with the Union judiciary. Articles 148-151 deal with the Comptroller and Auditor General of India.



Part VI

Covering Articles 152-237 deals with the government at the state level. Article 152 exempts Jammu & Kashmir from the category of ordinary States. Articles 153-162 deal with the State Governor. Articles 163-164 deal with the Chief Minister and his council of ministers. Article 165 deals with the Advocate General for the State. Article 166 relates to the conduct of business of the government of a State. Article 167 relates to the duties of Chief Minister with respect to furnishing of information to the Governor. Articles 168-195 deal with the organisation of state legislatures and so on. Articles 196-212 deal with the legislative procedure in the States. Article 213 deals with the legislative powers of the Governor. Articles 214-232 deal with the organisation and powers of High Courts in the States. Article 233-237 deal with the subordinate courts.



Part VII

Comprising Article 238, which dealt with States in Part B of the First Schedule was repealed in 1956 by the Seventh Amendment.



Part VIII

Covering Articles 239-241 deals with Union Territories. Articles 239- 241 contain provisions regarding the administration of Union Territories. Article 342 relating to Coorg was repealed by the Seventh Amendment in 1956.



Part IX

Relating to territories in Part D of the First Schedule and other territories was repealed in 1956. A new Part IX was added to the Constitution by the Seventy-third Amendment Act of 1992. It comprises 16 Articles and a new Schedule- ‘Schedule Eleven’. These articles provide for the constitution, composition, election, duration, powers and responsibilities and power to levy taxes and duties by the Panchayati Raj institutions in the rural areas. Schedule Eleven contains 29 subjects on which the Panchayats have administrative control.



A new part IX-

A to the Constitution was added by the Seventy-fourth Amendment Act, 1992. It consists of 18 Articles and a new Schedule – ‘Schedule Twelve’. These articles provide for the constitution, composition, election, and duration of municipalities, and powers and responsibilities of municipalities in respect of preparation of plans for economic development, levy tax and other duties. Schedule Twelve contains 18 subjects on which the municipalities exercise administrative control.



Part X

Deals with the scheduled and tribal areas, and contains Articles 244 and 244A.



Part XI

Deals with relations between the Union and the States. Articles 245- 255 deal with their legislative relations. Articles 256-263 deal with their administrative relations.



Part XII

deals with finance, property, contracts and suits (264-267). Articles 268- 300 A deal with the distribution of revenue between the Union and States, appointment of Finance Commission, miscellaneous financial provisions, borrowing by Government of India and States property, contracts, etc. rights, liabilities, and obligation suits.



Part XIII

Covering Articles 301-307 relates to trade, commerce and intercourse within the territory of India.



Part XIV

Relates to services under the Union and States and contains Articles 308 to 314. Articles 315-323 relate to the Union Public Service Commission and Public Service Commissions in states.



Part XIV- A inserted by the 42nd Amendment in 1976 contains only Articles 323A and 323B which deal with administrative tribunals which may be set up by the Parliament to hear disputes and complaints regarding Union, State or local government employees as well as for other matters.



Part XV

Deals with elections. Article 324 relates to the Election Commission. Articles 325-329 refer to other matters relating to elections.



Part XVI

Covers Articles 330-342 and concerns special provision relating to certain classes such as reservation of seats for Scheduled Castes and Scheduled Tribes in Lok Sabha and State Assemblies; representation of Anglo- Indian community in Lok Sabha and Legislative Assemblies; claims of Scheduled Castes and Scheduled Tribes to services and posts; special provision regarding educational grants; appointment of commission to investigate conditions of Backward Classes, etc.



Part XVII

Covering Articles 343-351 relates to Official Language.



Part XVIII

Deals with Emergency provisions. Article 352 contains provisions regarding emergency due to external deals with the effects of the above proclamation of emergency. Article 354 relates to changes that can be effected in the distribution of revenues between the central and state governments. Article 355 asserts the duty of Union to protect states against external aggression and internal disturbances and ensure that government is carried on in accordance with the provisions of the Constitution. Article 356 deals with President’s rule in the state. Article 357 authorises Parliament to confer on the President the power to make laws on state subjects and authorises the President to permit expenditure from the Consolidated Fund of the State. Article 358 provides for automatic suspension of Article 19 (regarding right to freedom) when Emergency under Article 352 is in operation. Article 359 authorises the President to suspend the right to constitutional remedies. Article 360 relates to financial emergency.



Part XIX

Contains miscellaneous provisions, regarding exemption of the President and Governors from criminal proceedings for their official acts; immunity from court proceedings for publication of the report of proceedings of the Parliament and state legislatures and so on. This part contains Article 361- 367.



Part XX

Deals with the Amendment of the Constitution. Article 368 deals with the powers of the Parliament to amend the Constitution.



Part XXI

Contains temporary, transitional and special provisions. Article 369 accords temporary powers to the Parliament to make laws with respect to certain matters in the State List as if they were matters in the Concurrent List. Article 370 contains temporary provisions relating to Jammu & Kashmir. It restricts the power of Parliament to make laws for the State only with regard to matters listed in the Instrument of Accession and such other matters in the Union List and the Concurrent List which the President may specify with the concurrence of the government of that State.



Articles 371A, 371B, 371C, 371D, 371E, 371F, 371G, 371H and 3711 relate to special provisions for Maharashtra, Nagaland, Assam, Manipur, Andhra Pradesh, Sikkim, Mizoram, Arunachal Pradesh and Goa. Article 372 deals with the continuance in force of the existing laws and their adaptation. Articles 372- 392 deal with several other miscellaneous matters. A number of these articles have since been repealed.



Part XXII

Concerns the short tide, commencement and repeal of the Constitution. It contains Articles 393- 395


Nigeria won 2015 FIFA U-17 World Cup



ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE



  1. Nigeria won the 2015 FIFA U-17 World Cup that was held across 8 cities in Chile since 17 October 2015. In the finals Nigeria  defeated Mali by 2-0. Oshimhen and Bamgboye scored the goals for Nigeria at the 56th and 59th minute respectively.

  2. FIFA U-17 World Cup  is the world championship of association football for male players under the age of 17 organized by Federation Internationale de Football Association (FIFA).

  3. Nigeria is the most successful nation in the tournament's history, with five titles and three runners up. The Brazil is the second most successful with three titles and two runners up. Ghana and Mexico have won the tournament twice.