Pages

Tuesday 27 October 2015

ಗ್ರೂಪ್ ಬಿ, ಸಿ ಹಾಗೂ ಡಿ ಹುದ್ದೆಗಳಿಗೆ ಸಂದರ್ಶನ ಇಲ್ಲ



ಕೆಳ ಹಂತದ ಹುದ್ದೆಗಳಿಗೆ
ಸಂದರ್ಶನ ಇಲ್ಲ: ಪ್ರಧಾನಿ
‪#‎JNANASELE
ಹೊಸದಿಲ್ಲಿ: ಮುಂದಿನ ವರ್ಷ ಜನವರಿ 1ರಿಂದ ಕೆಳ ಹಂತದ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ 'ಮನ್
ಕೀ ಬಾತ್'ನಲ್ಲಿ ಭಾನುವಾರ ತಿಳಿಸಿದ್ದಾರೆ.
'ಕೇಂದ್ರ ಸರಕಾರದ ಗ್ರೂಪ್ ಬಿ, ಸಿ ಹಾಗೂ ಡಿ ಶ್ರೇಣಿಯ ಹುದ್ದೆಗಳಿಗೆ 2016 ಜನವರಿ 1ರಿಂದ
ಸಂದರ್ಶನ ಇರುವುದಿಲ್ಲ,' ಎಂದು ಅವರು ತಿಳಿಸಿದ್ದಾರೆ.
ಚಿನ್ನದ ಗಟ್ಟಿ, ಆಭರಣ ಠೇವಣಿ ಮೇಲೆ ಬಡ್ಡಿ ನೀಡುವ ಹೊಸ ಯೋಜನೆಗೆ ಒತ್ತು ನೀಡಿರುವ ಪ್ರಧಾನಿ, 'ಚಿನ್ನದ ಠೇವಣಿ ಯೋಜನೆಗೆ ಭದ್ರತೆಯ ಖಾತರಿ ಇದೆ. ಮುಂಬರುವ
ವಾರಗಳಲ್ಲಿ ಯೋಜನೆಗೆ ಚಾಲನೆ
ದೊರೆಯಲಿದೆ,'ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಜತೆಗೆ, ಅಶೋಕ ಚಕ್ರದ ಚಿತ್ರ ಇರುವ ಹೊಸ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿಯೂ ಪ್ರಧಾನಿ ಘೋಷಿಸಿದ್ದಾರೆ.
ಭಾಷಣ ಪ್ರಮುಖಾಂಶ:
*ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ ಜನ್ಮ ದಿನೋತ್ಸವ. ಒಂದು ದೇಶ, ಮಹಾನ್ ದೇಶ ಸರ್ದಾರ್ ಪಟೇಲ್ ಅವರ ಭವ್ಯ
ಭಾರತದ ಕನಸನ್ನು ನನಸಾಗಿಸೋಣ.
*ಹಲವು ಧರ್ಮ, ಸಮುದಾಯಗಳು, ಭಾಷೆಗಳು, ಜಾತಿ, ಜೀವನಶೈಲಿಯ ವೈವಿಧ್ಯತೆಯ ದೇಶ ನಮ್ಮದು. ಆ ವೈವಿಧ್ಯತೆಯೇ ನಮಗೆ ಶೋಭೆ.
*ಅಂಗ ದಾನ ಬಹಳ ಮಹತ್ವದ್ದು, ಕಿಡ್ನಿ , ಹೃದಯ, ಯಕೃತ್ತಿಗೆ ಬೇಡಿಕೆ ಹೆಚ್ಚಿದ್ದು, ಅಂಗಾಂಗ ಕಸಿ ಅತಿ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಕೆಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆ
ಸರಳಗೊಂಡಿದೆ. ಈ ವಿಚಾರದಲ್ಲಿ ತಮಿಳುನಾಡು ಪ್ರಗತಿ ಸಾಧಿಸಿದೆ.
*ಭಾರತ-ಆಫ್ರಿಕಾ ಸಂಬಂಧ ಗಟ್ಟಿಯಾಗಿದ್ದು , ಎರಡು ದೇಶಗಳ ನಡುವೆ ಬಹಳಷ್ಟು ಸಾಮತ್ಯತೆ
ಇದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಭಾರತ ದೊಡ್ಡ ಕೊಡುಗೆ ನೀಡುತ್ತಿದೆ.
ಆಫ್ರಿಕಾದ 25,000ಕ್ಕೂ ಹೆಚ್ಚು
ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.
*ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಶಿಷ್ಯವೇತನ ನೀಡುತ್ತಿದೆ.
*ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸಕ್ರಿಯವಾಗಿರುವ ಸಂಸದರಿಗೆ ಅಭಿನಂದನೆ.
*ದೀಪಾವಳಿ ನಂತರ ಬ್ರಿಟನ್ಗೆ ಭೇಟಿ
ನೀಡಲಿದ್ದೇನೆ.
*ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಜೈ
ಹಿಂದ್.

No comments:

Post a Comment

Note: only a member of this blog may post a comment.